ಧರಸಾನ ಸತ್ಯಾಗ್ರಹ
ಅಂದು ೨೧ ಮೇ ೧೯೩೦. ಗುಜರಾತಿನ ಕರಾವಳಿಯ ಧರಸಾನ ಎಂಬ ಪುಟ್ಟ ಹಳ್ಳಿಯಲ್ಲಿ ಸುಡುತ್ತಿದ್ದ ಸೂರ್ಯ ತನ್ನ ಪ್ರಕಾಶವನ್ನು ಕಳೆದುಕೊಂಡು ಕೆಂಪು ಬಣ್ಣಕ್ಕೆ ತಿರುಗಿದ್ದ. ಮನೆಯಲ್ಲೇ ನೇಯ್ದ ಒರಟು ಖಾದಿ ದೋತ್ರ, ಅಂಗಿ, ಗಾಂಧಿ ಟೊಪ್ಪಿ ಧರಿಸಿದ ಸುಮಾರು ೨೫೦೦ ಸತ್ಯಾಗ್ರಹಿಗಳು ಧರಸಾನದ ದಿಬ್ಬಗಳ ಮೇಲೆ ಸೇರಿದ್ದರು. ಆ ಸತ್ಯಾಗ್ರಹಿಗಳು ಮುನ್ನೆಡೆಯುವ ಮುನ್ನ ಪ್ರಾರ್ಥನೆ ಮಾಡಬೇಕೆಂದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಕೇಳಿಕೊಂಡಾಗ ಇಡೀ ಗುಂಪು ಮಂಡಿಯೂರಿತು. ಅವರನ್ನುದ್ದೇಶಿಸಿ ಭಾವೋದ್ರಿಕ್ತರಾಗಿ ಸರೋಜಿನಿ ನಾಯ್ಡು ಉಪದೇಶಿಸುತ್ತಾರೆ “ಗಾಂಧೀಜಿಯವರ ದೇಹ […]